ಆರಾಧ್ಯದೈವ ಶ್ರೀಗುರು ಕೊಟ್ಟೂರೇಶ್ವರರ ಕೊನೆಯ ಕಾರ್ತೀಕ ಉತ್ಸವದಲ್ಲಿ ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ತಮ್ಮ ಹರಕೆಯನ್ನು ತೀರಿಸಿದ ಮುಸ್ಲೀಂ ಬಾಂಧವರು....ಕೊಟ್ಟೂರು ಒಂದು ಜಾತ್ಯಾತೀತ ಪ್ರಾಂತ್ಯ ಎಂಬುದಕ್ಕೆ ಉತ್ತಮ ಸಾಕ್ಷಿ ಇದಾಗಿದ್ದು, ಇತಿಹಾಸ ಪೂರ್ವದಿಂದಲೂ ಇದು ಹೀಗೆಯೇ ನಡೆದುಕೊಂಡು ಬರುತ್ತಿದೆ. ಇತ್ತೀಚೆಗೆ ಕೆಲವರು ತಮ್ಮ ಸ್ವಂತಿಕೆಯನ್ನು ಮೆರೆಯಲು ಅಲ್ಲಲ್ಲಿ ಜಾತಿಕಿಡಿ ಹೊತ್ತಿಸಿಕೊಂಡು ಬರುತ್ತಿದ್ದಾರಾದರೂ ಸತ್ಯ ಸತ್ಯವಾಗಿಯೇ ಇರುತ್ತದೆ ಎಂಬುದು ಅವರಿಗೆ ಅರಿವಾಗಿದ್ದರೂ ಮತ್ತೆ ಹೊಲಸು ತಿನ್ನುವ ಕೆಲಸಕ್ಕೆ ಕೈಹಾಕುತ್ತಾರೆಂದರೆ ಅಂತವರಿಗೇನೂ ಹೇಳಲುಬಾರದು. ಶ್ರೀಗುರು ಕೊಟ್ಟೂರೇಶ್ವರರು ತಮ್ಮ ಪವಾಡಗಳಿಂದ ಜಾತಿಯೆಂದೇಳುವ ಪ್ರತಿಯೊಂದೂ ಮಜಲಿಗೂ ತನ್ನ ಸೇವೆಗೆಂದು ಅವಕಾಶ ಕೊಟ್ಟಿದ್ದಾನೆ. ಉದಾಹರಣೆಗೆ ಆಶೀರ್ವಾದ ಕೊಡಲು ಬೇಡಜಂಗಮರಿಗೆ ಅವಕಾಶ ನೀಡಿದ್ದಾನೆ , ಹಿರೇಮಠದ ಜಾತ್ರೆ, ಉತ್ಸವಗಳಲ್ಲಿ ಊರಿನ ಗೌಡರು, ಗಾಣಿಗರು, ವಿಶ್ವಕರ್ಮದವರು ಇನ್ನಿತರರಿಗೆ ಅವಕಾಶ ಕಲ್ಪಿಸಿದ್ದಾರೆ, ಇನ್ನು ರಥೋತ್ಸವದ ಸಂದರ್ಭದಲ್ಲಿ ದಲಿತ ಮಹಿಳೆಯೊಬ್ಬರು ಆರತಿ ಬೆಳಗಿ, ಗಿಣ್ಣದ ನೈವೇದ್ಯ ನೀಡುವ ಅವಕಾಶವನ್ನು ಕಲ್ಪಿಸಿದ್ದಾರೆ. ಶ್ರೀಗುರು ಕೊಟ್ಟೂರೇಶ್ವರರು ತಮ್ಮ ಪವಾಡಗಳಿಂದ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಪ್ರತಿವರ್ಷ ಮೊಹರಂ ಸಂದರ್ಭದಲ್ಲಿ ದೇವರುಗಳಿಗೆ ಕೊಟ್ಟೂರ ಹಿರೇಮಠದ ಮುಂದೆ ಮಂಗಳಾರತಿಯನ್ನು ಬೆಳಗುವುದರ ಮೂಲಕ ಹಿಂದೂ ಮುಸ್ಲಿಂ ಬಾಂಧವ್...
ವಾ ವ
ReplyDeletetq
Delete